ಶರಣಬಸವೇಶ್ವರರ ದೇವಸ್ಥಾನ, ಕೆಬಿಎನ್ ದರ್ಗಾ ದರ್ಶನ ಪಡೆದ ಸಿಎಂ ಡಿ.ಕೆ. ಶಿವಕುಮಾರ್
ಕಲಬುರಗಿ: ಜಿಲ್ಲಾ ಭೇಟಿಯಲ್ಲಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಂಗಳವಾರ ಈ ಭಾಗದ ಸೌಹಾರ್ದ ಪರಂಪರೆಯ ಎರಡು ಕಣ್ಣುಗಳಂತಿರುವ ಶರಣಬಸವೇಶ್ವರರ ದೇವಸ್ಥಾನ ಹಾಗೂ ಸೂಫಿ ಸಂತ ಖಾಜಾ ಬಂದಾನವಾಜ್ ದರ್ಗಾಕ್ಕೆ ಭೇಟಿ ನೀಡಿ ದೇವರ ಪಡೆದರು.ನಗರದ ಐವಾನ್ ಎ ಶಾಹಿ ಅತಿಥಿ ಗೃಹದಲ್ಲಿ ಸಾರ್ವಜನಿಕರ ಅಹವಾಲು ಆಲಿಸಿದ ಮುಖ್ಯಮಂತ್ರಿ ಶಿವಕುಮಾರ್, ಮೊದಲಿಗೆ ವೈದ್ಯಕೀಯ ಶಿಕ್ಷಣ ಸ

ಕಲಬುರಗಿ: ಜಿಲ್ಲಾ ಭೇಟಿಯಲ್ಲಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಂಗಳವಾರ ಈ ಭಾಗದ ಸೌಹಾರ್ದ ಪರಂಪರೆಯ ಎರಡು ಕಣ್ಣುಗಳಂತಿರುವ ಶರಣಬಸವೇಶ್ವರರ ದೇವಸ್ಥಾನ ಹಾಗೂ ಸೂಫಿ ಸಂತ ಖಾಜಾ ಬಂದಾನವಾಜ್ ದರ್ಗಾಕ್ಕೆ ಭೇಟಿ ನೀಡಿ ದೇವರ ಪಡೆದರು.ನಗರದ ಐವಾನ್ ಎ ಶಾಹಿ ಅತಿಥಿ ಗೃಹದಲ್ಲಿ ಸಾರ್ವಜನಿಕರ ಅಹವಾಲು ಆಲಿಸಿದ ಮುಖ್ಯಮಂತ್ರಿ ಶಿವಕುಮಾರ್, ಮೊದಲಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲರ ಮನೆಗೆ ಸೌಜನ್ಯಯುತ ಭೇಟಿ ನೀಡಿದರು. ಅಲ್ಲಿಯೇ ಉಪಾಹಾರವನ್ನೂ ಸ್ವೀಕರಿಸಿದರು. ನಂತರ ಈ ಭಾಗದ ಪ್ರಸಿದ್ಧ ಶರಣ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ಶರಣ ಬಸವೇಶ್ವರರ ಗದ್ದುಗೆಗಳಿಗೆ ಪೂಜೆ ಸಲ್ಲಿಸಿದರು. ಸಂಸ್ಥಾನದ 8ನೇ ಪೀಠಾಧಿಪತಿ ಶರಣಬಸವಪ್ಪ ಅಪ್ಪ ಅವರ ಗದ್ದುಗೆ ದರ್ಶನ ಪಡೆದರು. ಬಳಿಕ ಶರಣ ಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ದೊಡ್ಡಪ್ಪ ಅಪ್ಪ, ಶರಣ ಬಸವ ವಿವಿ ಕುಲಾಧಿಪತಿ ದ್ರಾಕ್ಷಾಯಣಿ ಎಸ್.ಅಪ್ಪ, ಬಸವರಾಜ ದೇಶಮುಖ ಅವರು ಮುಖ್ಯಮಂತ್ರಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಿದರು. ತಲೆಗೆ ಪೇಟ ತೊಡಿಸಿ, ಶಾಲು ಹೊದಿಸಿ, ಪುಷ್ಪ ಹಾರ ಹಾಕಿ ಗೌರವಿಸಿದರು. ಅಲ್ಲಿಂದ ಹೊರಟ ಶಿವಕುಮಾರ್ ಅವರು 14ನೇ ಶತಮಾನದ ಸೂಫಿ ಸಂತ ಖಾಜಾ ಬಂದಾನವಾಜ್ ದರ್ಗಾಕ್ಕೆ ಭೇಟಿ ನೀಡಿದರು. ಸೂಫಿ ಸಂತನ ಗದ್ದುಗೆ ಗುಲಾಬಿ ಪುಷ್ಪಗಳ ಚಾದರ್ ಅರ್ಪಿಸಿದರು.ಬಳಿಕ ದರ್ಗಾದ ಮುಖ್ಯಸ್ಥ ಮುಹಮ್ಮದ್ ಅಲಿ ಅಲ್ ಹುಸೇನಿ ಅವರು ಮುಖ್ಯಮಂತ್ರಿ ಅವರನ್ನು ಪುಷ್ಪಹಾರ ಹಾಕಿ, ತಲೆಗೆ ಬಿಳಿ ರುಮಾಲೂ ಸುತ್ತಿ ಸತ್ಕರಿಸಿದರು.ಅವರಿಗೆ ಡಿಸಿಎಂ ಜಿ. ಪರಮೇಶ್ವರ್, ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಸಚಿವರಾದ ಶರಣಪ್ರಕಾಶ ಪಾಟೀಲ, ಯು.ಟಿ.ಖಾದರ್ ಸೇರಿದ ಹಲವರು ಉಪಸ್ಥಿತರಿದ್ದರು.