ಪುಣೆ ಉದ್ಯಮಿ ಮರ್ಡರ್ ಕೇಸ್; ನನ್ನ ಮಗನ ಸಾವಿಗೆ ನ್ಯಾಯ ಕೊಡಿಸಿ ಎಂದು ಪ್ರಧಾನಿಗೆ ಪತ್ರ ಬರೆದ ಕೇತನ್ ತಾಯಿ
ಪುಣೆ: ಪುಣೆ ಉದ್ಯಮಿ ಕೇತನ್ ಅಗರ್ವಾಲ್ ಕೊಲೆ (Ketan Murder Case) ಪ್ರಕರಣದಲ್ಲಿ, ತನ್ನ ಮಗನಿಗೆ ಆದ ಅನ್ಯಾಯ ಬೇರಾರಿಗೂ ಆಗಬಾರದು. ಅವನ ಸಾವಿಗೆ ನ್ಯಾಯ ದೊರಕಿಸಿಕೊಡಿ ಎಂದು ಕೇತನ್ ತಾಯಿ (Pune Crime) ರಾಖಿ ಅಗರ್ವಾಲ್ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಪ್ರಧಾನಿಗೆ ಬರೆದ ಪತ್ರದಲ್ಲೇನಿದೆ? ನನ್ನ ಸ್ವಂತ ಮಗನಿಗೆ ನ್ಯಾಯ ಕೊಡಿಸಿ ಎಂದು

ಪುಣೆ: ಪುಣೆ ಉದ್ಯಮಿ ಕೇತನ್ ಅಗರ್ವಾಲ್ ಕೊಲೆ (Ketan Murder Case) ಪ್ರಕರಣದಲ್ಲಿ, ತನ್ನ ಮಗನಿಗೆ ಆದ ಅನ್ಯಾಯ ಬೇರಾರಿಗೂ ಆಗಬಾರದು. ಅವನ ಸಾವಿಗೆ ನ್ಯಾಯ ದೊರಕಿಸಿಕೊಡಿ ಎಂದು ಕೇತನ್ ತಾಯಿ (Pune Crime) ರಾಖಿ ಅಗರ್ವಾಲ್ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಪ್ರಧಾನಿಗೆ ಬರೆದ ಪತ್ರದಲ್ಲೇನಿದೆ? ನನ್ನ ಸ್ವಂತ ಮಗನಿಗೆ ನ್ಯಾಯ ಕೊಡಿಸಿ ಎಂದು ನಿಮಗೆ ಪತ್ರ ಬರೆಯಬೇಕಾದ ಪರಿಸ್ಥಿತಿ ಬರುತ್ತದೆ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ. ಪ್ರತಿಯೊಬ್ಬ ತಾಯಿಯಂತೆ, ನಾನು ಕೂಡ ಕೇತನ್ ತನ್ನ ಬದುಕನ್ನು ಚೆನ್ನಾಗಿ ರೂಪಿಸಿಕೊಳ್ಳುವುದನ್ನು, ಮದುವೆಯಾಗುವುದನ್ನು ಮತ್ತು ನಮ್ಮೊಂದಿಗೆ ಬೆಳೆಯುವುದನ್ನು ನೋಡಬೇಕು ಎಂದು ಕನಸು ಕಂಡಿದ್ದೆ. ಆದರೆ, ನನ್ನ ಮಗನ ಚಿತೆಗೆ ನಾನೇ ಅಗ್ನಿ ಸ್ಪರ್ಶ ಮಾಡಬೇಕಾಯಿತು. ಒಬ್ಬ ತಾಯಿಗೆ ಇದಕ್ಕಿಂತ ದೊಡ್ಡ ನೋವು ಬೇರೊಂದಿಲ್ಲ. ನನ್ನ ಮಗನನ್ನು ಅತ್ಯಂತ ಕ್ರೂರವಾಗಿ ಕೊಲೆ ಮಾಡಲಾಗಿದೆ. ಅವನೊಂದಿಗೆ ನನ್ನ ಇಡೀ ಪ್ರಪಂಚವೇ ಕೊನೆಯಾಗಿದೆ. ನಮ್ಮ ಮನೆಯ ಮೂಲೆ ಮೂಲೆಗಳೂ ನನಗೆ ಅವನನ್ನೇ ನೆನಪಿಸುತ್ತವೆ. ಅವನ ಕೋಣೆ, ಅವನ ಬಟ್ಟೆಗಳು, ಅವನ ಫೋಟೋಗಳು ಮತ್ತು ಅವನ ನಗುವಿನ ಜಾಗದಲ್ಲಿ ಆವರಿಸಿರುವ ಮೌನ, ಅವನು ಇನ್ನು ಮುಂದೆ ಎಂದಿಗೂ ಮರಳಿ ಬರುವುದಿಲ್ಲ ಎಂಬುದನ್ನು ನನಗೆ ಪ್ರತಿದಿನ ನೆನಪಿಸುತ್ತವೆ. ಕೇತನ್ ತೀರಿಕೊಂಡ ಕೇವಲ ಇಪ್ಪತ್ತು ದಿನಗಳಲ್ಲೇ ನನ್ನ ಮಾವನವರೂ ಸಹ ತೀರಿಕೊಂಡರು. ಇದು ನಮ್ಮ ಕುಟುಂಬಕ್ಕೆ ಮತ್ತೊಂದು ದೊಡ್ಡ ಆಘಾತ ನೀಡಿದೆ. ಅವರು ಕೇತನ್ನನ್ನು ತುಂಬಾ ಪ್ರೀತಿಸುತ್ತಿದ್ದರು. ತನ್ನ ಮೊಮ್ಮಗನನ್ನು ಕಳೆದುಕೊಂಡ ದುಃಖವನ್ನು ಅವರ ಕೈಯಲ್ಲಿ ತಡೆದುಕೊಳ್ಳಲು ಆಗಲಿಲ್ಲ. ಹೀಗೆ ಕೆಲವೇ ದಿನಗಳಲ್ಲಿ ನಮ್ಮ ಕುಟುಂಬವು ಎರಡು ತಲೆಮಾರಿನವರನ್ನು ಕಳೆದುಕೊಂಡಿದೆ. ಇದನ್ನೂ ಓದಿ: ಪಿಒಕೆಯಲ್ಲಿ ಘರ್ಷಣೆ; ಪಾಕಿಸ್ತಾನ ಪಡೆಗಳು ನಡೆಸಿದ ಗುಂಡಿನ ದಾಳಿಗೆ 6 ನಾಗರಿಕರು ಬಲಿ ಮೋದಿ ಜಿ, ನಾನು ಕೇವಲ ಒಬ್ಬ ತಾಯಿ. ನಾನು ಯಾವುದೇ ಸಹಾನುಭೂತಿ ಅಥವಾ ವಿಶೇಷ ಸೌಲಭ್ಯವನ್ನು ಕೇಳುತ್ತಿಲ್ಲ. ನಾನು ಕೇಳುತ್ತಿರುವುದು ಕೇವಲ ನ್ಯಾಯ ಮಾತ್ರ. ನ್ಯಾಯ ಸಿಗದೇ ಕಳೆಯುವ ಪ್ರತಿಯೊಂದು ದಿನವೂ ನಮ್ಮ ನೋವನ್ನು ಇನ್ನುಷ್ಟು ಹೆಚ್ಚಿಸುತ್ತಿದೆ. ಕೇತನ್ ಮತ್ತೆ ಮರಳಿ ಬರಲು ಸಾಧ್ಯವಿಲ್ಲ ನಿಜ, ಆದರೆ ಅವನ ಪ್ರಾಣ ತೆಗೆದವರಿಗೆ ಕಾನೂನಿನ ಅಡಿಯಲ್ಲಿ ಕಠಿಣ ಶಿಕ್ಷೆಯಾಗಲೇಬೇಕು. ನನ್ನ ಮಗನಿಗೆ ನ್ಯಾಯ ಸಿಗಬೇಕು, ಅಷ್ಟೇ ನನ್ನ ಆಸೆ. ನನ್ನ ಮಗನ ಪ್ರಕರಣಕ್ಕೆ ಸೂಕ್ತ ಗಮನ ಹರಿಸಿ, ಯಾವುದೇ ವಿಳಂಬವಿಲ್ಲದೆ ಆದಷ್ಟು ಬೇಗ ನ್ಯಾಯ ಸಿಗುವಂತೆ ಮಾಡಬೇಕೆಂದು ನಾನು ಕೈಮುಗಿದು ವಿನಮ್ರವಾಗಿ ವಿನಂತಿಸಿಕೊಳ್ಳುತ್ತೇನೆ. ದಯವಿಟ್ಟು ಕೇತನ್ನನ್ನು ಕೇವಲ ಒಂದು ಕಡತದ ಫೈಲ್ ಆಗಿ ಉಳಿಯಲು ಬಿಡಬೇಡಿ. ನನಗೆ ಅವನೇ ಇಡೀ ಜಗತ್ತಾಗಿದ್ದ. ಪ್ರತಿದಿನ ರಾತ್ರಿ ನಾನು ಅವನ ಫೋಟೋವನ್ನು ನೋಡಿ, “ಮಗನೇ, ನಿನ್ನ ತಾಯಿ ನಿನಗಾಗಿ ಇನ್ನು ಹೋರಾಡುತ್ತಿದ್ದಾಳೆ” ಎಂದು ಹೇಳುತ್ತೇನೆ. ಒಂದು ದಿನ ಅವನಿಗೆ “ಮಗನೇ… ನಿನಗೆ ನ್ಯಾಯ ಸಿಕ್ಕಿತು” ಎಂದು ಹೇಳುವಂತಾಗಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ದುಃಖದಲ್ಲಿರುವ ಒಬ್ಬ ತಾಯಿಯ ಧ್ವನಿಯನ್ನು ನೀವು ಕೇಳುತ್ತೀರಿ ಎಂದು ನಾನು ಪ್ರಾಮಾಣಿಕವಾಗಿ ನಂಬುತ್ತೇನೆ. Pune | Ketan Agarwal’s mother, Rakhi Agarwal, writes an email letter to PM Modi urging for justice for her son pic.twitter.com/QwhGB5abVn — ANI (@ANI) July 14, 2026 ರಾಷ್ಟ್ರಪತಿಗೆ ಕೇತನ್ ತಂದೆ ಪತ್ರ ಇದರ ಮೊದಲು ಜುಲೈ 10ರಂದು ಕೇತನ್ ತಂದೆ ವಿಶಾಲ್ ಅಗರ್ವಾಲ್ ಕೂಡ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದು, ಪ್ರಕರಣವನ್ನು ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದರು. ಜೂನ್ 18ರಂದು ಪುಣೆ ಸಮೀಪದ ಲೋಹಗಡ್ ಕೋಟೆಯಲ್ಲಿ ಕೇತನ್ ಅಗರ್ವಾಲ್ ಕೊಲೆಯಾಗಿದ್ದಾರೆ ಎನ್ನಲಾಗಿದೆ. ಈ ಪ್ರಕರಣದಲ್ಲಿ ಅವರ ನಿಶ್ಚಿತಾರ್ಥವಾಗಿದ್ದ ಸಿಯಾ ಗೋಯಲ್ ಹಾಗೂ ಆಕೆಯ ಸ್ನೇಹಿತ ಚೇತನ್ ಬಾಬುಲಾಲ್ ಚೌಧರಿ ವಿರುದ್ಧ ಕೊಲೆ ಆರೋಪ ಕೇಳಿಬಂದಿದ್ದು, ಇಬ್ಬರನ್ನೂ ಪೊಲೀಸರು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಶಾರುಖ್ ಖಾನ್ಗೆ ರಿಲೀಫ್ – `ಮನ್ನತ್’ ನವೀಕರಣ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ ಏನಿದು ಕೇಸ್? ಕೇತನ್ ಅಗರ್ವಾಲ್ ಜೂನ್ 18ರಂದು ಲೋಹಗಡ್ ಕೋಟೆ ಬಳಿ ಕಣಿವೆಗೆ ಬಿದ್ದು ಸಾವನ್ನಪ್ಪಿದ್ದ. ಆರಂಭದಲ್ಲಿ ಇದನ್ನು ಆಕಸ್ಮಿಕ ಸಾವು ಎಂದು ದಾಖಲಿಸಲಾಗಿತ್ತು. ಆದರೆ ತನಿಖೆಯ ಬಳಿಕ, ಕೇತನ್ ಭಾವಿ ಪತ್ನಿ ಸಿಯಾ ಗೋಯಲ್ ಮತ್ತು ಆಕೆಯ ಪ್ರೇಮಿ ಚೇತನ್ ಸೇರಿ ಆತನನ್ನು ಕೊಲೆ ಮಾಡಿದ್ದಾರೆ ಎಂಬುದು ತಿಳಿದುಬಂತು. ಸದ್ಯ ಅವರಿಬ್ಬರನ್ನು ಬಂಧಿಸಲಾಗಿದ್ದು, ಸಿಸಿಟಿವಿ ದೃಶ್ಯಗಳು, ಡಿಜಿಟಲ್ ಸಾಕ್ಷ್ಯಗಳು ಹಾಗೂ ಸಾಕ್ಷಿಗಳ ಹೇಳಿಕೆಗಳ ಆಧಾರದ ಮೇಲೆ ತನಿಖೆ ಮುಂದುವರಿದಿದೆ.