ಬೇರೆಯವ್ರ ನೋವಿನ ಬಗ್ಗೆ ಚುಚ್ಚಿ ಮಾತನಾಡಬೇಡಿ: ಗೆಳೆಯ ವೈಶಾಕ್ ಸಾವಿನ ಬಳಿಕ ನಟಿ ಕೃಷಿ ತಾಪಂಡ ಮೊದಲ ಮಾತು
– ಹೆಣ್ಣಾಗಿ ಹುಟ್ಟಿದ್ದು ಶಾಪವೇನೋ ಎನಿಸುತ್ತಿದೆ ಎಂದು ನಟಿ ಭಾವುಕ ಗೆಳೆಯ ವೈಶಾಕ್ ಸಾವಿನ ಬಳಿಕ ನಟಿ ಕೃಷಿ ತಾಪಂಡ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಭಾವುಕ ಮಾತುಗಳನ್ನಾಡಿದ್ದಾರೆ. ನನ್ನ ಜೀವನದಲ್ಲಿ ಏನು ನಡೆಯುತ್ತಿದೆ ಎಂದು ನನಗೆ ಅರ್ಥವಾಗುತ್ತಿಲ್ಲ. ನಿಮಗೆ ಅದು ಒಂದು ಘಟನೆ ಆಗಿರಬಹುದು. ಆದರೆ ನನಗೆ ಒಂದು ಲಾಸ್. ಯಾರಾದರೂ ‘ಹೇಗಿದ್ದೀರಾ?’ ಎಂದು ಕೇಳಿದರೆ ಏನೂ ತೋ

– ಹೆಣ್ಣಾಗಿ ಹುಟ್ಟಿದ್ದು ಶಾಪವೇನೋ ಎನಿಸುತ್ತಿದೆ ಎಂದು ನಟಿ ಭಾವುಕ ಗೆಳೆಯ ವೈಶಾಕ್ ಸಾವಿನ ಬಳಿಕ ನಟಿ ಕೃಷಿ ತಾಪಂಡ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಭಾವುಕ ಮಾತುಗಳನ್ನಾಡಿದ್ದಾರೆ. ನನ್ನ ಜೀವನದಲ್ಲಿ ಏನು ನಡೆಯುತ್ತಿದೆ ಎಂದು ನನಗೆ ಅರ್ಥವಾಗುತ್ತಿಲ್ಲ. ನಿಮಗೆ ಅದು ಒಂದು ಘಟನೆ ಆಗಿರಬಹುದು. ಆದರೆ ನನಗೆ ಒಂದು ಲಾಸ್. ಯಾರಾದರೂ ‘ಹೇಗಿದ್ದೀರಾ?’ ಎಂದು ಕೇಳಿದರೆ ಏನೂ ತೋಚುವುದಿಲ್ಲ. ನಾನು ಒಳಗಿನಿಂದ ಸಂಪೂರ್ಣವಾಗಿ ಒಡೆದು ಹೋಗಿದ್ದೇನೆ ಎಂದು ನೊಂದು ಪೋಸ್ಟ್ ಮಾಡಿದ್ದಾರೆ. ನೋವಿನ ನಡುವೆಯೂ ಕೆಲಸದ ನಿಮಿತ್ತ ಪ್ರಮೋಷನಲ್ ವೀಡಿಯೋಗಳನ್ನು ಹಾಕಿದ್ದೆ. ಅದಕ್ಕೂ ಕಮೆಂಟ್ಸ್ಗಳನ್ನ ಹಾಕಿ ನಮ್ಮ ಬಗ್ಗೆ ಮಾತನಾಡ್ತಾರೆ. ಸೈಲೆಂಟ್ ಆಗಿದ್ರೆ ನಮ್ಮದೇ ತಪ್ಪು ಅನ್ನೋ ಹಾಗೆ ಮಾತನಾಡ್ತಾರೆ. ನಾವು ಸತ್ತರೆ ಹೇಡಿಗಳು ಎನ್ನುತ್ತಾರೆ, ಬದುಕಲು ಪ್ರಯತ್ನಿಸಿದರೂ ಮಾತನಾಡ್ತಾರೆ ಎಂದು ಬೇಸರ ಹೊರಹಾಕಿದ್ದಾರೆ. ಇಷ್ಟಪಟ್ಟು ಕಟ್ಟಿದ ಮನೆಯಲ್ಲಿ ಈಗ ವಾಸ ಮಾಡಲು ಸಾಧ್ಯವಿಲ್ಲ. ಅದರ ಬಾಡಿಗೆಯನ್ನು ನಾನೇ ಕಟ್ಟುತ್ತಿದ್ದೇನೆ, ಬದುಕಲು ದುಡಿಯಬೇಕು. ಹೆಣ್ಣಾಗಿ ಹುಟ್ಟಿದ್ದು ಶಾಪವೇನೋ ಎನಿಸುತ್ತದೆ. ಬೇರೆಯವರ ನೋವಿನ ಬಗ್ಗೆ ಚುಚ್ಚಿ ಮಾತನಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.