ಅಪಾರ್ಟ್ಮೆಂಟ್ ಮಾಲೀಕರ ಸಮಸ್ಯೆಗಳಿಗೆ ಶೀಘ್ರವೇ ಶಾಶ್ವತ ಪರಿಹಾರ – ಹೊಸ ಮಸೂದೆ ತರಲು ಮುಂದಾದ ಸರ್ಕಾರ
– ಆಗಸ್ಟ್ ಅಧಿವೇಶನದಲ್ಲೇ ಬಿಲ್ ಮಂಡನೆಗೆ ಸಿದ್ಧತೆ ಬೆಂಗಳೂರು: ರಾಜ್ಯದಲ್ಲಿ ಲಕ್ಷಾಂತರ ಅಪಾರ್ಟ್ಮೆಂಟ್ (Apartment) ನಿವಾಸಿಗಳ ಬಹುಕಾಲದ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸಿದೆ. ಅಪಾರ್ಟ್ಮೆಂಟ್ ಮಾಲೀಕತ್ವ, ಮಾರಾಟ, ಕಾಮನ್ ಏರಿಯಾ, ಅಸೋಸಿಯೇಷನ್ ಜವಾಬ್ದಾರಿ ಹಾಗೂ ನಿರ್ವಹಣೆಗೆ ಸಂಬಂಧಿಸಿದ ಸಮಗ್ರ ಹೊಸ ವಿಧೇಯಕ ತರಲು ಸರ್ಕಾರ ಸಜ್ಜಾಗಿದೆ. ಕರಡು ಮಸೂದೆಗೆ ಮುನ್ನವ

– ಆಗಸ್ಟ್ ಅಧಿವೇಶನದಲ್ಲೇ ಬಿಲ್ ಮಂಡನೆಗೆ ಸಿದ್ಧತೆ ಬೆಂಗಳೂರು: ರಾಜ್ಯದಲ್ಲಿ ಲಕ್ಷಾಂತರ ಅಪಾರ್ಟ್ಮೆಂಟ್ (Apartment) ನಿವಾಸಿಗಳ ಬಹುಕಾಲದ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸಿದೆ. ಅಪಾರ್ಟ್ಮೆಂಟ್ ಮಾಲೀಕತ್ವ, ಮಾರಾಟ, ಕಾಮನ್ ಏರಿಯಾ, ಅಸೋಸಿಯೇಷನ್ ಜವಾಬ್ದಾರಿ ಹಾಗೂ ನಿರ್ವಹಣೆಗೆ ಸಂಬಂಧಿಸಿದ ಸಮಗ್ರ ಹೊಸ ವಿಧೇಯಕ ತರಲು ಸರ್ಕಾರ ಸಜ್ಜಾಗಿದೆ. ಕರಡು ಮಸೂದೆಗೆ ಮುನ್ನವೇ ಅಪಾರ್ಟ್ಮೆಂಟ್ ಮಾಲೀಕರ ಸಂಘಗಳು ಹಾಗೂ ನಿವಾಸಿಗಳಿಂದ ಅಭಿಪ್ರಾಯ ಸಂಗ್ರಹಿಸಲು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ (Krishna Byre Gowda) ಸಂವಾದ ನಡೆಸಿದರು. ಬೆಂಗಳೂರಿನ ನೆಹರು ತಾರಾಲಯದಲ್ಲಿ ಅಪಾರ್ಟ್ಮೆಂಟ್ ಮಾಲೀಕತ್ವ ಮತ್ತು ನಿರ್ವಹಣಾ ವಿಧೇಯಕ ಕುರಿತು ಮಹತ್ವದ ಸಂವಾದ ನಡೆಯಿತು. ಮುಂದಿನ ಅಧಿವೇಶನದಲ್ಲೇ ಮಸೂದೆ ಮಂಡಿಸುವ ಗುರಿಯನ್ನು ಸರ್ಕಾರ ಹೊಂದಿದೆ. 50 ವರ್ಷಗಳಲ್ಲಿ ಅಪಾರ್ಟ್ಮೆಂಟ್ಗಳು ಹೆಚ್ಚಾಗಿವೆ 1972ರ ಕರ್ನಾಟಕ ಅಪಾರ್ಟ್ಮೆಂಟ್ ಓನರ್ಶಿಪ್ ಕಾಯ್ದೆ ಇಂದಿನ ಅಗತ್ಯಗಳಿಗೆ ಸಾಕಾಗುತ್ತಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು. ಕಳೆದ 50 ವರ್ಷಗಳಲ್ಲಿ ನಗರಗಳಲ್ಲಿ ಬಹುಮಹಡಿ ಅಪಾರ್ಟ್ಮೆಂಟ್ಗಳು ಗಣನೀಯವಾಗಿ ಹೆಚ್ಚಿವೆ. ಸಾವಿರಾರು ಫ್ಲಾಟ್ಗಳಿರುವ ಬೃಹತ್ ಸಮುಚ್ಚಯಗಳು ನಿರ್ಮಾಣವಾಗಿವೆ. ವಿಲ್ಲಾಗಳು, ವಾಣಿಜ್ಯ ಬಳಕೆ ಹಾಗೂ ಮಿಶ್ರ ಯೋಜನೆಗಳಿಂದ ಸಂಕೀರ್ಣ ಸಮಸ್ಯೆಗಳು ಎದುರಾಗುತ್ತಿವೆ ಎಂದು ವಿವರಿಸಿದರು. ಹೊಸ ವಿಧೇಯಕದಲ್ಲಿ ಅಪಾರ್ಟ್ಮೆಂಟ್ ಮಾಲೀಕತ್ವ, ಮಾರಾಟ, ನಿರ್ವಹಣೆ, ಕಾಮನ್ ಏರಿಯಾ, ಅಸೋಸಿಯೇಷನ್ ರಚನೆ ಮತ್ತು ಅವುಗಳ ಜವಾಬ್ದಾರಿಗಳ ಬಗ್ಗೆ ಸ್ಪಷ್ಟ ನಿಯಮಗಳನ್ನ ಸೇರಿಸಲಾಗುತ್ತಿದೆ. ಕರಡು ಮಸೂದೆ ಬಿಡುಗಡೆಗೂ ಮುನ್ನ ಸಾರ್ವಜನಿಕರ ಅಭಿಪ್ರಾಯ ಪಡೆದು ಅಂತಿಮ ರೂಪ ನೀಡಲಾಗುತ್ತದೆ ಎಂದು ಸಚಿವರು ತಿಳಿಸಿದರು. ಅಪಾರ್ಟ್ಮೆಂಟ್ ಬಿಲ್ಗೆ ನಿಮ್ಮ ಅಭಿಪ್ರಾಯ ಬೇಕು. ವಿಧಾನಸಭೆಗೆ ಮಂಡಿಸುವ ಮೊದಲು ಎಲ್ಲರ ಸಲಹೆ ಪಡೆದು ಇನ್ನಷ್ಟು ಅಭಿವೃದ್ಧಿಪಡಿಸುತ್ತೇವೆ. ನಮ್ಮ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ಈಡೇರಿಸುತ್ತೇವೆಂದು ತಿಳಿಸಿದ್ದೇವೆ. ಅದರಂತೆ ಕಾರ್ಯಗತವಾಗಲಿದೆ ಎಂದ್ರು. ಶಾಶ್ವತ ಪರಿಹಾರ ನೀಡುವುದೇ ನಮ್ಮ ಉದ್ದೇಶ ಸಂವಾದದಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಅಪಾರ್ಟ್ಮೆಂಟ್ ಮಾಲೀಕರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವುದೇ ಸರ್ಕಾರದ ಉದ್ದೇಶ ಎಂದರು. ಮನೆ ಖರೀದಿಸಿದವರು ಸಂಪೂರ್ಣ ಹಕ್ಕು ಹೊಂದಬೇಕು. ಒಪ್ಪಂದ, ನೋಂದಣಿ, ಕಾಮನ್ ಏರಿಯಾ, ದಾಖಲಾತಿ ವರ್ಗಾವಣೆ ಸೇರಿದಂತೆ ಹಲವು ಸಮಸ್ಯೆಗಳನ್ನು ಕಾನೂನಿನ ಮೂಲಕ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು. ಜನರು ಕಷ್ಟಪಟ್ಟು ಮನೆ ಖರೀದಿಸುತ್ತಾರೆ. ಅವರ ಆಸ್ತಿ ಮೇಲೆ ಸಂಪೂರ್ಣ ಹಕ್ಕು ಇರಬೇಕು. ಸಮಸ್ಯೆಗಳನ್ನು ಕಾನೂನಿನ ಮೂಲಕ ಪರಿಹರಿಸುತ್ತೇವೆಂದು ಆಶ್ವಾಸನೆ ನೀಡಿದ್ದಾರೆ. ಬೆಂಗಳೂರಿನ 40 ಲಕ್ಷ ಆಸ್ತಿಗಳ ಪೈಕಿ 26 ಲಕ್ಷ ಆಸ್ತಿಗಳಿಗೆ ಇ-ಖಾತಾ ನೀಡಲಾಗಿದೆ ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದರು. ಸಂವಾದದಲ್ಲಿ ಅಪಾರ್ಟ್ಮೆಂಟ್ ನಿವಾಸಿಗಳು ನೇರವಾಗಿ ಪ್ರಶ್ನೆಗಳನ್ನು ಕೇಳಿದರು. ಅಪಾರ್ಟ್ಮೆಂಟ್ ಮಾಲೀಕರು, ಅಸೋಸಿಯೇಷನ್ಗಳು, ಡೆವಲಪರ್ಗಳು ಮತ್ತು ಸಾರ್ವಜನಿಕರಿಂದ ಸಲಹೆ ಪಡೆದು ಹೊಸ ವಿಧೇಯಕಕ್ಕೆ ಅಂತಿಮ ರೂಪ ನೀಡಲು ಸರ್ಕಾರ ಮುಂದಾಗಿದೆ. ಆಗಸ್ಟ್ 6 ರಿಂದ ಆರಂಭವಾಗಲಿರುವ ಅಧಿವೇಶನದಲ್ಲಿ ಮಸೂದೆ ಮಂಡಿಸುವ ಗುರಿ ಹೊಂದಿರುವ ಸರ್ಕಾರ, ಅಪಾರ್ಟ್ಮೆಂಟ್ ನಿವಾಸಿಗಳ ಹಲವು ವರ್ಷಗಳ ಸಮಸ್ಯೆಗೆ ಕಾನೂನುಬದ್ಧ ಪರಿಹಾರ ನೀಡುವ ಭರವಸೆ ನೀಡಿದೆ.