ಪ್ರವಾಸಕ್ಕೆ ತೆರಳಿದ್ದ ವೇಳೆ ಕಾಲು ಜಾರಿ ಪುರಾತನ ಬಾವಿಗೆ ಬಿದ್ದು ಬಾಲಕ ಸಾವು
ದಾವಣಗೆರೆ: ಪ್ರವಾಸಕ್ಕೆ (Trip) ತೆರಳಿದ್ದ ವೇಳೆ ಕಾಲು ಜಾರಿ ಪುರಾತನ ಬಾವಿಗೆ (Well) ಬಿದ್ದು ಬಾಲಕ ಸಾವನ್ನಪ್ಪಿರುವ ಘಟನೆ ವಿಜಯನಗರ (Vijayanagara) ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಬಾಗಳಿಯ ಶ್ರೀ ಕಲ್ಲೇಶ್ವರ ದೇಗುಲದ (Kalleshwara Temple) ಬಳಿ ನಡೆದಿದೆ. ವಿಷ್ಣು (10) ಮೃತಪಟ್ಟ ಬಾಲಕ. ವಿಷ್ಣು ಹರಪನಹಳ್ಳಿಯ (Harapanahalli) ಗಾಜಿನಕೇರಿಯ ನಿವಾಸಿಗಳಾದ ವಿ

ದಾವಣಗೆರೆ: ಪ್ರವಾಸಕ್ಕೆ (Trip) ತೆರಳಿದ್ದ ವೇಳೆ ಕಾಲು ಜಾರಿ ಪುರಾತನ ಬಾವಿಗೆ (Well) ಬಿದ್ದು ಬಾಲಕ ಸಾವನ್ನಪ್ಪಿರುವ ಘಟನೆ ವಿಜಯನಗರ (Vijayanagara) ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಬಾಗಳಿಯ ಶ್ರೀ ಕಲ್ಲೇಶ್ವರ ದೇಗುಲದ (Kalleshwara Temple) ಬಳಿ ನಡೆದಿದೆ. ವಿಷ್ಣು (10) ಮೃತಪಟ್ಟ ಬಾಲಕ. ವಿಷ್ಣು ಹರಪನಹಳ್ಳಿಯ (Harapanahalli) ಗಾಜಿನಕೇರಿಯ ನಿವಾಸಿಗಳಾದ ವಿನೋದ್ – ವಿದ್ಯಾ ದಂಪತಿ ಪುತ್ರ. ಕುಟುಂಬ ಸದ್ಯಸರು ಮಕ್ಕಳ ಜೊತೆ ಪ್ರವಾಸಕ್ಕೆ ತೆರಳಿದ್ದ ವೇಳೆ ದುರಂತ ಸಂಭವಿಸಿದೆ. ಮಗನನ್ನು ಕಳೆದುಕೊಂಡ ತಂದೆ, ತಾಯಿಯರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ರೇವಣ್ಣ ಸಲಹೆಯಂತೆ ಅಜ್ಜಿಯ ಅಂತ್ಯಸಂಸ್ಕಾರಕ್ಕೆ ಪೆರೋಲ್ ಸಲ್ಲಿಸದ ಪ್ರಜ್ವಲ್ ಹರಪನಹಳ್ಳಿಯ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಬಾಲಕನ ಮೃತದೇಹ ಹೊರ ತೆಗೆದಿದ್ದಾರೆ. ಘಟನೆ ಸಂಬಂಧ ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಜೆಡಿ ವ್ಯಾನ್ಸ್-ಉಷಾ ದಂಪತಿಗೆ ನಾಲ್ಕನೇ ಮಗುವಿನ ಜನನ; ಅಮೆರಿಕ ರಾಜಕೀಯದಲ್ಲಿ ಅಪರೂಪದ ದಾಖಲೆ
Read the complete story at Public TV Kannada