ಲೆಕ್ಕ ಕೊಡಿ ಚಳವಳಿ ಮತ್ತೆ ಶುರು: ಮಾಜಿ ಶಾಸಕ ಎಚ್.ಎಸ್. ಶಿವಶಂಕರ್
ದಾವಣಗೆರೆ: ‘ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಟ್ರಸ್ಟಿಗಳ ವಿರುದ್ಧದ ‘ಲೆಕ್ಕ ಕೊಡಿ’ ಚಳವಳಿಯನ್ನು ಮತ್ತೆ ಆರಂಭಿಸುತ್ತೇವೆ’ ಎಂದು ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ತಿಳಿಸಿದರು. ‘ಚಳವಳಿಯ ಭಾಗವಾಗಿ ಮಠದ ಟ್ರಸ್ಟಿ ಬಿ.ಸಿ. ಉಮಾಪತಿ ಅವರ ಅಂಗಡಿಗಳ ಎದುರು ಪ್ರತಿಭಟನೆ ನಡೆಸಲಾಗುವುದು’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ‘ಸಮ

ದಾವಣಗೆರೆ: ‘ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಟ್ರಸ್ಟಿಗಳ ವಿರುದ್ಧದ ‘ಲೆಕ್ಕ ಕೊಡಿ’ ಚಳವಳಿಯನ್ನು ಮತ್ತೆ ಆರಂಭಿಸುತ್ತೇವೆ’ ಎಂದು ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ತಿಳಿಸಿದರು. ‘ಚಳವಳಿಯ ಭಾಗವಾಗಿ ಮಠದ ಟ್ರಸ್ಟಿ ಬಿ.ಸಿ. ಉಮಾಪತಿ ಅವರ ಅಂಗಡಿಗಳ ಎದುರು ಪ್ರತಿಭಟನೆ ನಡೆಸಲಾಗುವುದು’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ‘ಸಮುದಾಯದ ನಾಯಕರು ಸಂಧಾನ ನಡೆಸಿದ್ದರಿಂದ ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿ ಸಿದ್ದೆವು. ಮಾತಿನಂತೆ ಟ್ರಸ್ಟಿಗಳು ಸತ್ಯ ಹಾಗೂ ಧರ್ಮದ ಲೆಕ್ಕ ಒಪ್ಪಿಸಿಲ್ಲ. ಆದ್ದರಿಂದ ಮತ್ತೆ ಹೋರಾಟ ಆರಂಭಿಸುತ್ತೇವೆ. ಲೆಕ್ಕ ಕೊಡುವವರೆಗೂ ಇದು ಮುಂದುವರಿಯಲಿದೆ’ ಎಂದರು. ‘ವಿಶೇಷ ನ್ಯಾಯಾಲಯವು ಪೋಕ್ಸೊ ಪ್ರಕರಣದಲ್ಲಿ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿಗೆ ಜಾಮೀನು ನೀಡಿದೆ. ಇದರಿಂದ ನಮ್ಮ ಹೋರಾಟಕ್ಕೆ ಮತ್ತಷ್ಟು ಬಲ ಸಿಕ್ಕಂತಾಗಿದೆ’ ಎಂದು ಹೇಳಿದರು. ‘ಗುರುಪೀಠದಲ್ಲಿ ವಸತಿ ನಿಲಯ ನಿರ್ಮಿಸದೇ ಇದ್ದರೂ ಟ್ರಸ್ಟಿಗಳು ಸರ್ಕಾರದಿಂದ ₹ 10.50 ಕೋಟಿ ಅನುದಾನ ಪಡೆದಿದ್ದಾರೆ. ಇದಕ್ಕಾಗಿ ಅಧಿಕಾರಿಗಳ ಫೋರ್ಜರಿ ಸಹಿಗಳನ್ನೂ ಮಾಡಿದ್ದಾರೆ. ಟ್ರಸ್ಟಿಗಳು ನಡೆಸಿರುವ ಅವ್ಯವಹಾರ, ಅಕ್ರಮದ ಬಗ್ಗೆ ತನಿಖೆ ನಡೆಸುವಂತೆ ಲೋಕಾಯುಕ್ತ, ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ದೂರು ಕೊಡುತ್ತೇವೆ’ ಎಂದು ಗುರುಪೀಠದ ಆಡಳಿತಾಧಿಕಾರಿ ಪಿ.ರಾಜಕುಮಾರ್ ತಿಳಿಸಿದರು. ‘ವಚನಾನಂದ ಸ್ವಾಮೀಜಿಯನ್ನು ಜೈಲಿಗೆ ಕಳುಹಿಸಿ ಮಠದ ಆಡಳಿತವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಟ್ರಸ್ಟಿಗಳು ಪ್ರಯತ್ನಿಸಿದ್ದರು. ಅವರ ಸಂಚು, ಕುತಂತ್ರ ಫಲಿಸಿಲ್ಲ. ಇದುವರೆಗೂ ಸತ್ಯದ ಲೆಕ್ಕ ಒಪ್ಪಿಸಿಲ್ಲ. ಹೀಗಿದ್ದರೂ ಸಮುದಾಯದ ವಿದ್ಯಾರ್ಥಿಗಳಿಗೆ ಟ್ರಸ್ಟ್ನಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಿರುವುದು ಸರಿಯಲ್ಲ. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಬಾರದು’ ಎಂದು ಲೆಕ್ಕ ಕೊಡಿ ಹೋರಾಟ ಸಮಿತಿಯ ಅಧ್ಯಕ್ಷ ಎಂ.ಜಿ.ಪರಮೇಶ್ವರ ಗೌಡ ಹೇಳಿದರು. ‘ಗುರುಪೀಠದಲ್ಲಿ ಜುಲೈ 29ರಂದು ಗುರು ಪೂರ್ಣಿಮೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಚನಾನಂದ ಸ್ವಾಮೀಜಿ ಸನ್ಯಾಸ ಸ್ವೀಕರಿಸಿ 25 ವರ್ಷ ಪೂರೈಸಿದ್ದು, ಇದರ ‘ಬೆಳ್ಳಿಹಬ್ಬ’ವೂ ಅಂದೇ ಇರುವುದರಿಂದ ಮಹಾಜಪ ಯೋಗ, ಇಷ್ಟಲಿಂಗ, ಮಹಾ ಮಂಗಳಾರತಿ, ಪ್ರಸಾದ ವಿತರಣೆ ಸೇರಿದಂತೆ ದಿನವಿಡೀ ಹಲವು ಕಾರ್ಯಕ್ರಮಗಳನ್ನು ನಡೆಸಲಾಗುವುದು. ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು’ ಎಂದು ಎಚ್.ಎಸ್. ಶಿವಶಂಕರ್ ಮನವಿ ಮಾಡಿದರು.ಗುರು ಪೂರ್ಣಿಮೆ 29ರಂದು