ಬೆಳಗಾವಿ: ಕಳೆಗುಂದಿದ ಹುಕ್ಕೇರಿ ಗುಮ್ಮಟಗಳು!
ಹುಕ್ಕೇರಿ: ಪ್ರೇಕ್ಷಣೀಯ ಸ್ಥಳ ವಿಜಯಪುರ ಹೊರತುಪಡಿಸಿದರೆ, ಅತಿ ಹೆಚ್ಚು ಗೋಳಗುಮ್ಮಟ ಹೊಂದಿರುವ ಪಟ್ಟಣ ಹುಕ್ಕೇರಿ. 15ನೇ ಶತಮಾನದಿಂದಲೂ ಇದು ಗುಮ್ಮಟ ಮತ್ತು ನೀರಿನಕಾರಂಜಿಗೆ ಹೆಸರುವಾಸಿ.ಒಂದೇ ಕಡೆ ಮೂರು ಗುಮ್ಮಟಗಳಿದ್ದರೂ, ಒಂದರ ನೆರಳು ಇನ್ನೊಂದರ ಮೇಲೆ ಬೀಳದೇ ಇರುವುದು ಈ ಗುಮ್ಮಟಗಳ ವಿಶೇಷ. 15ನೇ ಶತಮಾನದಲ್ಲಿ ಇಂಡೋ-ಅರೇಬಿಕ್ ಶೈಲಿಯಲ್ಲಿ ನಿರ್ಮಾಣವಾದ ಗೋಳಗುಮ್ಮಟಗ

ಹುಕ್ಕೇರಿ: ಪ್ರೇಕ್ಷಣೀಯ ಸ್ಥಳ ವಿಜಯಪುರ ಹೊರತುಪಡಿಸಿದರೆ, ಅತಿ ಹೆಚ್ಚು ಗೋಳಗುಮ್ಮಟ ಹೊಂದಿರುವ ಪಟ್ಟಣ ಹುಕ್ಕೇರಿ. 15ನೇ ಶತಮಾನದಿಂದಲೂ ಇದು ಗುಮ್ಮಟ ಮತ್ತು ನೀರಿನಕಾರಂಜಿಗೆ ಹೆಸರುವಾಸಿ.ಒಂದೇ ಕಡೆ ಮೂರು ಗುಮ್ಮಟಗಳಿದ್ದರೂ, ಒಂದರ ನೆರಳು ಇನ್ನೊಂದರ ಮೇಲೆ ಬೀಳದೇ ಇರುವುದು ಈ ಗುಮ್ಮಟಗಳ ವಿಶೇಷ. 15ನೇ ಶತಮಾನದಲ್ಲಿ ಇಂಡೋ-ಅರೇಬಿಕ್ ಶೈಲಿಯಲ್ಲಿ ನಿರ್ಮಾಣವಾದ ಗೋಳಗುಮ್ಮಟಗಳು ಪಟ್ಟಣದ ಇತಿಹಾಸಕ್ಕೆ ಮೆರುಗು ತಂದಿವೆ.ವಿಜಯಪುರದ ಆದಿಲ್ಶಾಹಿಗಳ ಆಳ್ವಿಕೆಯಲ್ಲಿದ್ದ ಹುಕ್ಕೇರಿ ಪಟ್ಟಣವು ಆಗ ‘ಹೂವಿನ ಕೇರಿ’ ಎಂದು ಖ್ಯಾತಿ ಪಡೆದಿತ್ತು. ಆಗಿನ ದೊರೆ ಕಂದಾಯ ವಸೂಲಿ ಮಾಡಲು ಸರದಾರ ನಿಜಾಮ-ಐನ್ ಉಲ್ಮುಲ್ಕ ಅವರನ್ನು ನೇಮಕ ಮಾಡಿದ್ದರು. ಕ್ರಿಯಾಶೀಲವಾಗಿದ್ದ ಸರದಾರ ತಮ್ಮ ಅವಧಿಯಲ್ಲಿ ನಿರ್ಮಿಸಿದ್ದ ಕಾರಂಜಿಗಳು ಮತ್ತು ಗೋಳಗುಮ್ಮಟಗಳು ಇಂದಿಗೂ ಗಮನಸೆಳೆಯುತ್ತಿವೆ.ಆದಿಲ್ಶಾಹಿಗಳ ನಂತರ ಬ್ರಿಟಿಷರು ಅವುಗಳನ್ನು ತಮಗೆ ಪ್ರವಾಸಿ ಮಂದಿರಗಳಾಗಿ ಬಳಸಿಕೊಳ್ಳುತ್ತಿದ್ದರು. ಸ್ವಾತಂತ್ರ್ಯ ನಂತರವೂ ಪ್ರವಾಸಿ ಮಂದಿರಗಳಾಗಿದ್ದ ಗುಮ್ಮಟಗಳು ಹುಕ್ಕೇರಿ ಪುರಸಭೆ ಸುಪರ್ದಿಗೆ ಬಂದ ನಂತರ ನಿರ್ಲಕ್ಷ್ಯಕ್ಕೆ ಒಳಗಾಗಿ ಅಕ್ರಮ ಚಟುವಟಿಕೆ ತಾಣಗಳಾದವು.ಹಾಳಾಗುತ್ತಿದ್ದ ಅಂಥ ಗುಮ್ಮಟಗಳು ಮರಳಿ ತಮ್ಮ ಗತವೈಭವ ಸಾರುವಂತೆ, ಅವುಗಳನ್ನು ಸೌಂದರ್ಯೀಕರಣಗೊಳಿಸಲಾಗಿತ್ತು. ಆಗ ಹುಕ್ಕೇರಿ ಕ್ಷೇತ್ರ ಪ್ರತಿನಿಧಿಸುತ್ತಿದ್ದ ದಿ.ಉಮೇಶ ಕತ್ತಿ ಅವರು, ಲೋಕೋಪಯೋಗಿ ಇಲಾಖೆ ಮೂಲಕ ಗುಮ್ಮಟಗಳ ದುರಸ್ತಿ ಮಾಡಿ ಪ್ರವಾಸಿಗರನ್ನು ಸೆಳೆಯುವ ಪ್ರಯತ್ನ ಮಾಡಿದ್ದರು. ಅವರು ನಿಧನ ಹೊಂದಿದ ಬಳಿಕ ಈಗ ಅವುಗಳು ಕೂಡ ಅನಾಥವಾಗಿ ನಿಂತಿವೆ.‘ಗೋಳಗುಮ್ಮಟಗಳು ಹಾಳಾಗುತ್ತಿರುವುದನ್ನು ನೋಡಿ ಮನಸ್ಸಿಗೆ ತುಂಬಾ ಖೇದವಾಗುತ್ತಿದೆ. ಉಮೇಶ ಕತ್ತಿ ಶಾಸಕರಾಗಿದ್ದ ವೇಳೆ, ಸೌಂದರ್ಯೀಕರಣ ಮಾಡಿಸಿದ್ದರು. ಈಗ ಮತ್ತೆ ಅವುಗಳ ಸೊಬಗು ಮರೆಯಾಗುತ್ತಿದೆ’ ಎಂದು ನಿವೃತ್ತ ಪ್ರಾಧ್ಯಾಪಕ ಶಿವಾನಂದ ಕಣಗಲಿ ಬೇಸರ ವ್ಯಕ್ತಪಡಿಸಿದರು.‘ಬಿಡುವಿನ ಅವಧಿಯಲ್ಲಿ ಜನರು ಸಮಯ ಕಳೆಯುವಂತೆ ಗೋಳಗುಮ್ಮಟಗಳನ್ನು ಅಭಿವೃದ್ಧಿಪಡಿಸಬೇಕು. ಅವುಗಳ ಸುತ್ತ ಆವರಣ ಗೋಡೆ, ಸುಂದರವಾದ ಹೂದೋಟ ನಿರ್ಮಾಣವಾಗಬೇಕು’ ಎಂದು ಸ್ಥಳೀಯ ನಿವಾಸಿ ಬಸವರಾಜ ವಾಜಂತ್ರಿ ಮನವಿ ಮಾಡಿದರು.‘ಹಾಳಾಗುತ್ತಿರುವ ಗುಮ್ಮಟಗಳನ್ನು ಮರುನಿರ್ಮಾಣ ಮಾಡಿ ನಿರ್ವಹಿಸುತ್ತೇವೆ. ಪ್ರಾಚ್ಯವಸ್ತು ಇಲಾಖೆ ಇವುಗಳನ್ನು ತನ್ನ ಸುಪರ್ದಿಗೆ ಪಡೆದುಕೊಂಡು ಸಂರಕ್ಷಿಸಬೇಕಿದೆ’ ಎಂದು ಲೋಕೋಪಯೋಗಿ ಇಲಾಖೆ ಎಇಇ ಪ್ರವೀಣ ಮಾಡ್ಯಾಳ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.ಡಾ.ಬಿ.ಎಸ್.ಪಾಟೀಲ, ಸ್ಥಳೀಯ2020ರಲ್ಲಿ ಉಮೇಶ ಕತ್ತಿ ಅವರು, ಗೋಳಗುಮ್ಮಟಗಳಿಗೆ ಹೊಸ ರೂಪ ಕೊಟ್ಟಿದ್ದರು. ಆದರೆ, ಈಗ ಸ್ಥಳೀಯರು ಗುಮ್ಮಟದ ಹೊಸ ಕಿಟಕಿ, ಬಾಗಿಲು ಕಿತ್ತುಕೊಂಡು ಹೋಗಿರುವುದು ದುರಂತ ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260724-21-1662407067