ಲೋಕಸಭೆಯಲ್ಲಿ ʻಪೇಪರ್ ಸೋರಿಕೆʼ ಸಮರ – ಇಂದು ರಾಹುಲ್, ಪ್ರಿಯಾಂಕಾ vs ತೇಜಸ್ವಿ, ಬಾನ್ಸುರಿ ಡಿಬೇಟ್
– ದಿನದ ಆರಂಭದಲ್ಲೇ ವಿಪಕ್ಷಗಳ ಗದ್ದಲ – ಮಧ್ಯಾಹ್ನ 2 ಗಂಟೆವರೆಗೆ ಸದನ ಮುಂದೂಡಿಕೆ ನವದೆಹಲಿ: ಸಾರ್ವಜನಿಕ ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಅಕ್ರಮಗಳನ್ನ ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಂಡಿಸಿರುವ ಸಾರ್ವಜನಿಕ ಪರೀಕ್ಷೆಗಳು (ಅನ್ಯಾಯ ಮಾರ್ಗಗಳ ತಡೆ) ತಿದ್ದುಪಡಿ ಮಸೂದೆ–2026 ಕುರಿತು ಇಂದು (ಜುಲೈ 28) ಲೋಕಸಭೆಯಲ್ಲಿ ಭಾರೀ ರಾಜಕೀಯ ಹಣಾಹಣಿ ನಡ

– ದಿನದ ಆರಂಭದಲ್ಲೇ ವಿಪಕ್ಷಗಳ ಗದ್ದಲ – ಮಧ್ಯಾಹ್ನ 2 ಗಂಟೆವರೆಗೆ ಸದನ ಮುಂದೂಡಿಕೆ ನವದೆಹಲಿ: ಸಾರ್ವಜನಿಕ ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಅಕ್ರಮಗಳನ್ನ ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಂಡಿಸಿರುವ ಸಾರ್ವಜನಿಕ ಪರೀಕ್ಷೆಗಳು (ಅನ್ಯಾಯ ಮಾರ್ಗಗಳ ತಡೆ) ತಿದ್ದುಪಡಿ ಮಸೂದೆ–2026 ಕುರಿತು ಇಂದು (ಜುಲೈ 28) ಲೋಕಸಭೆಯಲ್ಲಿ ಭಾರೀ ರಾಜಕೀಯ ಹಣಾಹಣಿ ನಡೆಯಲಿದೆ. ಸದ್ಯ ವಿಪಕ್ಷಗಳ ಗದ್ದಲ ಹಿನ್ನೆಲೆ ಮಧ್ಯಾಹ್ನ 2 ಗಂಟೆವರೆಗೆ ಸದನ ಮುಂದೂಡಲಾಗಿದೆ. ಪರೀಕ್ಷಾ ಅಕ್ರಮ ತಡೆ ಮಸೂದೆ ಹಾಗೂ ನೀಟ್ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಮಹಾ ಸಮರಕ್ಕೆ ಸಂಸತ್ತು ದೊಡ್ಡ ವೇದಿಕೆಯಾಗಲಿದೆ. ಸುಮಾರು 8 ಗಂಟೆ ಸಮಯ ಮೀಸಲಿಡಲಾಗಿದೆ. ಕಾಂಗ್ರೆಸ್ನಿಂದ ರಾಹುಲ್, ಪ್ರಿಯಾಂಕಾ ಅಖಾಡಕ್ಕೆ ಪ್ರತಿಪಕ್ಷಗಳ ಪರವಾಗಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಪ್ರಮುಖ ಭಾಷಣಕಾರರಾಗಲಿದ್ದಾರೆ. ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಚರ್ಚೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ದೇಶಾದ್ಯಂತ ವಿದ್ಯಾರ್ಥಿಗಳ ಪ್ರತಿಭಟನೆಗೆ ಕಾರಣವಾಗಿರುವ ಪರೀಕ್ಷಾ ಅಕ್ರಮಗಳ ವಿಚಾರದಲ್ಲಿ ಕಾಂಗ್ರೆಸ್ನ ಉನ್ನತ ನಾಯಕತ್ವವೇ ನೇರವಾಗಿ ಧ್ವನಿ ಎತ್ತಲಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಲೋಕಸಭೆಯ ಉಪನಾಯಕ ಗೌರವ್ ಗೊಗೊಯಿ ಕೂಡ ಪಕ್ಷದ ಪರವಾಗಿ ಮಾತನಾಡಲಿದ್ದಾರೆ. ಮೂಲಗಳ ಪ್ರಕಾರ, ಕಾಂಗ್ರೆಸ್ ಪರವಾಗಿ ಚರ್ಚೆಯನ್ನು ಗೌರವ್ ಗೊಗೊಯಿ ಆರಂಭಿಸಲಿದ್ದಾರೆ. ಎನ್ಸಿಪಿ (ಶರದ್ ಪವಾರ್) ಸಂಸದೆ ಸುಪ್ರಿಯಾ ಸುಳೆ ಕೂಡ ಚರ್ಚೆಯಲ್ಲಿ ಭಾಗವಹಿಸುವ ಸಾಧ್ಯತೆ ಇದ್ದು, ಪರೀಕ್ಷಾ ಅಕ್ರಮಗಳ ವಿಚಾರವನ್ನ ಸರ್ಕಾರದ ವಿರುದ್ಧದ ಪ್ರಮುಖ ರಾಜಕೀಯ ಅಸ್ತ್ರವನ್ನಾಗಿ ಬಳಸಲು ಇಂಡಿಯಾ ಮೈತ್ರಿಕೂಟ ಸಜ್ಜಾಗಿದೆ. ಯುವ ನಾಯಕರಿಗೆ ಹೊಣೆ ನೀಡಿದ ಎನ್ಡಿಎ ಇನ್ನೂ ಆಡಳಿತ ಪಕ್ಷದ ಪರವಾಗಿ ಬಿಜೆಪಿ ಅನುಭವಿ ಹಾಗೂ ಯುವ ನಾಯಕರನ್ನ ಅಖಾಡಕ್ಕಿಳಿಸುತ್ತಿದೆ. ಬಾನ್ಸುರಿ ಸ್ವರಾಜ್ ಹಾಗೂ ತೇಜಸ್ವಿ ಸೂರ್ಯ ಬಿಜೆಪಿಯ ಪರವಾಗಿ ಪ್ರಮುಖವಾಗಿ ಮಾತನಾಡಲಿದ್ದಾರೆ. ಸರ್ಕಾರ ಈ ಮಸೂದೆಯನ್ನು ಪರೀಕ್ಷಾ ಅಕ್ರಮಗಳ ವಿರುದ್ಧದ ಕಠಿಣ ಕ್ರಮವೆಂದು ಸಮರ್ಥಿಸಿಕೊಳ್ಳಲು ಮುಂದಾಗಿದೆ. ಇದರೊಂದಿಗೆ ಎನ್ಡಿಎ ಮಿತ್ರಪಕ್ಷಗಳ ಪರವಾಗಿ ಟಿಡಿಪಿಯ ಲಾವು ಕೃಷ್ಣ ದೇವರಾಯಲು, ಜೆಡಿಯು ನಾಯಕ ರಾಜೀವ್ ರಂಜನ್ ಸಿಂಗ್ (ಲಾಲನ್ ಸಿಂಗ್), ಶಿವಸೇನೆ ಸಂಸದ ಶ್ರೀಕಾಂತ್ ಶಿಂಡೆ, ಅಪ್ನಾ ದಳ (ಎಸ್) ನಾಯಕಿ ಅನುಪ್ರಿಯಾ ಪಟೇಲ್ ಹಾಗೂ ಎನ್ಸಿಪಿ ಸಂಸದ ಸುನಿಲ್ ತಟ್ಕರೆ ಮಾತನಾಡುವ ಸಾಧ್ಯತೆ ಇದೆ. ಇದಲ್ಲದೆ, ತೃಣಮೂಲ ಕಾಂಗ್ರೆಸ್ನ ಬಂಡಾಯ ಬಣದ ಪರವಾಗಿ ಸಯೋನಿ ಘೋಷ್ ಅಥವಾ ಮಿತಾಲಿ ಬಾಗ್ ಚರ್ಚೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.