ಶಸ್ತ್ರಚಿಕಿತ್ಸೆ ಬಳಿಕ ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ರಾಮ್ ಚರಣ್ ದಂಪತಿ
ಇತ್ತೀಚೆಗೆ, ಪೆದ್ದಿ ಚಿತ್ರದ ಸಾಹಸ ದೃಶ್ಯ ಒಂದರ ಚಿತ್ರೀಕರಣದ ವೇಳೆ ಬಲ ಮಣಿಕಟ್ಟಿನ ಗಾಯಕ್ಕೆ ತುತ್ತಾಗಿದ್ದ ನಟ ರಾಮ್ ಚರಣ್ ಅವರು ಶಸ್ತ್ರಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದಾರೆ. ಇದೀಗ ಪತ್ನಿ ಉಪಾಸನಾ ಅವರೊಂದಿಗೆ ಕೊಯಮತ್ತೂರಿನ ಅಯ್ಯಪ್ಪ ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದ್ದಾರೆ.ಪೆದ್ದಿ ಬಳಿಕ ನನ್ನ ಮಗಳು ಅಪ್ಪ ಅನ್ನೋದನ್ನೇ ಮರೆತು ಹೋಗಿದ್ದಾಳೆ

ಇತ್ತೀಚೆಗೆ, ಪೆದ್ದಿ ಚಿತ್ರದ ಸಾಹಸ ದೃಶ್ಯ ಒಂದರ ಚಿತ್ರೀಕರಣದ ವೇಳೆ ಬಲ ಮಣಿಕಟ್ಟಿನ ಗಾಯಕ್ಕೆ ತುತ್ತಾಗಿದ್ದ ನಟ ರಾಮ್ ಚರಣ್ ಅವರು ಶಸ್ತ್ರಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದಾರೆ. ಇದೀಗ ಪತ್ನಿ ಉಪಾಸನಾ ಅವರೊಂದಿಗೆ ಕೊಯಮತ್ತೂರಿನ ಅಯ್ಯಪ್ಪ ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದ್ದಾರೆ.ಪೆದ್ದಿ ಬಳಿಕ ನನ್ನ ಮಗಳು ಅಪ್ಪ ಅನ್ನೋದನ್ನೇ ಮರೆತು ಹೋಗಿದ್ದಾಳೆ ಎಂದ ರಾಮ್ ಚರಣ್ಮೊದಲ ಬಾರಿಗೆ ಅವಳಿ ಮಕ್ಕಳ ಫೋಟೊ ಹಂಚಿಕೊಂಡ ರಾಮ್ ಚರಣ್-ಉಪಾಸನಾ ದಂಪತಿಸ್ಟಾರ್ ನಟರಿಗಿಂತ ಕಮ್ಮಿ ಇಲ್ಲ ಈತ! ರಾಮ್ ಚರಣ್ ಅಂಗರಕ್ಷಕ ಕೆವಿನ್ ಯಾರು?ಭೋಪಾಲ್ ಜನರನ್ನು ಬಿಹಾರಿಗಳೆಂದು ಹೇಳಿ ಅಪಹಾಸ್ಯಕ್ಕೆ ಸಿಲುಕಿದ ನಟ ರಾಮ್ ಚರಣ್ರಾಮ್ ಚರಣ್ ಅವರು ಕುಟುಂಬದೊಂದಿಗೆ ದೇವಾಲಯಕ್ಕೆ ಭೇಟಿ ನೀಡಿರುವ ಫೋಟೊಗಳು ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಇದೇ ವೇಳೆ ರಾಮ್ ಚರಣ್ ಅವರು ಶಸ್ತ್ರಚಿಕಿತ್ಸೆಗೆ ಒಳಗಾದ ಕೈಗೆ ತೋಳಿನ ಜೋಲಿ (arm sling) ಧರಿಸಿದ್ದರು. ಪೂಜೆಯ ಬಳಿಕ ದೇವಾಸ್ಥಾನದ ಆಡಳಿತ ಮಂಡಳಿಯೊಂದಿಗೆ ಚರ್ಚೆ ನಡೆಸಿದರು. ಬಳಿಕ ಗೋಶಾಲೆಗೆ ಭೇಟಿ ನೀಡಿದ ದಂಪತಿ, ಹಸುಗಳಿಗೆ ಆಹಾರವನ್ನು ತಿನ್ನಿಸಿದ್ದಾರೆ. ಇದೇ ವೇಳೆ ದೇವಾಸ್ಥಾನಕ್ಕೆ ಆಗಮಿಸಿದ್ದ ಭಕ್ತರು ರಾಮ್ ಚರಣ್ ಅವರೊಂದಿಗೆ ಫೋಟೊಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. #RamCharan and his wife @upasanakonidela at Ayyappa swamy temple in Coimbatore today.. RC had a wrist surgery in Ganga Hospital..✌️ pic.twitter.com/KRKhBMqg8z— Laxmi Kanth (@iammoviebuff007) July 29, 2026 ಶಸ್ತ್ರಚಿಕಿತ್ಸೆ ಯಶಸ್ವಿಯಾದ ಬಳಿಕ ಆಸ್ಪತ್ರೆಯ ಸಿಬ್ಬಂದಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ರಾಮ್ ಚರಣ್ ಅವರ ಪೋಟೊವನ್ನು ಹಂಚಿಕೊಂಡು, ಅವರು ಆರೋಗ್ಯವಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಪೋಸ್ಟ್ನಲ್ಲಿ, ‘ಪ್ರೀತಿಯ ರಾಮ್ ಚರಣ್ ಅವರು ಕೊಯಮತ್ತೂರಿನ ಆಸ್ಪತ್ರೆಯಲ್ಲಿ ಅನುಭವಿ ವೈದ್ಯರ ತಂಡದೊಂದಿಗೆ ಮಣಿಕಟ್ಟಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. 8 ವಾರ ವಿಶ್ರಾಂತಿ ಪಡೆದುಕೊಳ್ಳಲು ವೈದ್ಯರು ಸಲಹೆ ನೀಡಿದ್ದಾರೆ’ ಎಂದು ಬರೆದುಕೊಂಡಿದ್ದಾರೆ. Mega Power Star @AlwaysRamCharan Anna & @upasanakonidela Vadina spotted at Coimbatore Ayyappa Swamy temple after completing his Wrist Surgery #RamCharan pic.twitter.com/0jNBO9DpAT— Rc Ali (@Muzakirali_07) July 29, 2026 ಬುಚ್ಚಿ ಬಾಬು ಸನ ನಿರ್ದೇಶನದಲ್ಲಿ ನಿರ್ಮಾಣವಾಗುತ್ತಿರುವ ಪೆದ್ದಿ ಸಿನಿಮಾದಲ್ಲಿ ರಾಮ್ ಚರಣ್ ಜೊತೆಗೆ ಜಾಹ್ನವಿ ಕಪೂರ್, ಜಗಪತಿ ಬಾಬು, ರಾವ್ ರಮೇಶ್, ಟಿನ್ನು ಆನಂದ್, ಬೊಮನ್ ಇರಾನಿ ಹಾಗೂ ರವಿ ಕಿಶನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.