ಹ್ಯಾಂಡ್ ಬ್ರೇಕ್ ಹಾಕದೇ ನಿಲ್ಲಿಸಿದ್ದ ಚಿಗರಿ ಬಸ್ ಡಿಕ್ಕಿ; ಇಬ್ಬರಿಗೆ ಗಾಯ
ಧಾರವಾಡ: ‘ಹ್ಯಾಂಡ್ ಬ್ರೇಕ್ ಹಾಕದೇ ನಿಲ್ಲಿಸಿದ್ದ ಚಿಗರಿ ಬಸ್ ಮುಂದಕ್ಕೆ ಚಲಿಸಿ ಪಾದಚಾರಿ ಮಾರ್ಗದ ಅಂಗಡಿ, ಪಕ್ಕದದಲ್ಲಿ ನಿಂತಿದ್ದ ವಾಹನಗಳಿಗೆ ಗುದ್ದಿದ ಘಟನೆ ಬಿಆರ್ಟಿಎಸ್ ನಿಲ್ದಾಣ ಸಮೀಪ ಅಂಜುಮನ್ ಕಾಂಪ್ಲೆಕ್ಸ್ ಮುಂಭಾಗದಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ಧಾರೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅಘವಡದಲ್ಲಿ ಒಂದು ಕಾರು,
ಧಾರವಾಡ: ‘ಹ್ಯಾಂಡ್ ಬ್ರೇಕ್ ಹಾಕದೇ ನಿಲ್ಲಿಸಿದ್ದ ಚಿಗರಿ ಬಸ್ ಮುಂದಕ್ಕೆ ಚಲಿಸಿ ಪಾದಚಾರಿ ಮಾರ್ಗದ ಅಂಗಡಿ, ಪಕ್ಕದದಲ್ಲಿ ನಿಂತಿದ್ದ ವಾಹನಗಳಿಗೆ ಗುದ್ದಿದ ಘಟನೆ ಬಿಆರ್ಟಿಎಸ್ ನಿಲ್ದಾಣ ಸಮೀಪ ಅಂಜುಮನ್ ಕಾಂಪ್ಲೆಕ್ಸ್ ಮುಂಭಾಗದಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ಧಾರೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅಘವಡದಲ್ಲಿ ಒಂದು ಕಾರು, ನಾಲ್ಕು ಬೈಕ್ಗಳು ಜಖಂಗೊಂಡಿವೆ. ‘ಚಾಲಕ ಇಳಿಜಾರಿನಲ್ಲಿ ಬಸ್ ನಿಲ್ಲಿಸಿದ್ದಾರೆ. ಹ್ಯಾಂಡ್ ಬ್ರೇಕ್ ಹಾಕದೆ ತೆರಳಿದ್ದರೆ. ಬಸ್ ಏಕಾಏಕಿ ಮುಂದೆ ಚಲಿಸಿ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಇಬ್ಬರು ಪಾದಚಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ’ ಎಂದು ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.
Read the complete story at Prajavani