ʻಪಬ್ಲಿಕ್ ಟಿವಿ ವಿದ್ಯಾಮಂದಿರʼ – ಮೊದಲ ದಿನ ಭರ್ಜರಿ ರೆಸ್ಪಾನ್ಸ್, ಸ್ಥಳದಲ್ಲೇ ಹಲವರಿಗೆ ಉದ್ಯೋಗಾವಕಾಶ
– ನೆಚ್ಚಿನ ಕೋರ್ಸ್, ಬದುಕಿನ ದಾರಿಗೆ ಸೂಕ್ತ ವೇದಿಕೆ ವಿದ್ಯಾಮಂದಿರ ಬೆಂಗಳೂರು: ಪಬ್ಲಿಕ್ ಟಿವಿಯ ವಿದ್ಯಾಮಂದಿರ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ತಮ್ಮ ಕನಸಿನ ಕೋರ್ಸ್ ಹಾಗೂ ಭವಿಷ್ಯ ಕಟ್ಟಿಕೊಳ್ಳುವ ಕೆಲಸ ಪಡೆಯಲು ನೂರಾರು ವಿದ್ಯಾರ್ಥಿಗಳು ಅತಿದೊಡ್ಡ ಶೈಕ್ಷಣಿಕ ಹಾಗೂ ಉದ್ಯೋಗ ಮೇಳಕ್ಕೆ ವಿದ್ಯಾರ್ಥಿಗಳ ದಂಡೇ ಹರಿದು ಬರ್ತಿದೆ. ಬದುಕಿನ ದಾರಿಗೆ ಸೂಕ್ತ ವೇ

– ನೆಚ್ಚಿನ ಕೋರ್ಸ್, ಬದುಕಿನ ದಾರಿಗೆ ಸೂಕ್ತ ವೇದಿಕೆ ವಿದ್ಯಾಮಂದಿರ ಬೆಂಗಳೂರು: ಪಬ್ಲಿಕ್ ಟಿವಿಯ ವಿದ್ಯಾಮಂದಿರ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ತಮ್ಮ ಕನಸಿನ ಕೋರ್ಸ್ ಹಾಗೂ ಭವಿಷ್ಯ ಕಟ್ಟಿಕೊಳ್ಳುವ ಕೆಲಸ ಪಡೆಯಲು ನೂರಾರು ವಿದ್ಯಾರ್ಥಿಗಳು ಅತಿದೊಡ್ಡ ಶೈಕ್ಷಣಿಕ ಹಾಗೂ ಉದ್ಯೋಗ ಮೇಳಕ್ಕೆ ವಿದ್ಯಾರ್ಥಿಗಳ ದಂಡೇ ಹರಿದು ಬರ್ತಿದೆ. ಬದುಕಿನ ದಾರಿಗೆ ಸೂಕ್ತ ವೇದಿಕೆ ವಿದ್ಯಾಮಂದಿರ ಪಬ್ಲಿಕ್ ಟಿವಿ ಪ್ರಸ್ತುತ ಪಡಿಸುವ AD6 ಅಡ್ವರ್ಟೈಸಿಂಗ್ ಸಹಯೋಗದಲ್ಲಿ ವಿದ್ಯಾಮಂದಿರ 2 ದಿನಗಳ ಮೆಗಾ ಶೈಕ್ಷಣಿಕ ಮತ್ತು ಉದ್ಯೋಗ ಮೇಳಕ್ಕೆ ಚಾಲನೆ ಸಿಕ್ಕಿದೆ. ಅರಮನೆ ಮೈದಾನ ಗಾಯಿತ್ರಿ ವಿಹಾರದಲ್ಲಿ ನಡೆಯುತ್ತಿರುವ ಪಿಜಿ ಶೈಕ್ಷಣಿಕ ಮೇಳಕ್ಕೆ ಮೊದಲ ದಿನವೇ ಪೋಷಕರು, ವಿದ್ಯಾರ್ಥಿಗಳ ದಂಡು ಹರಿದು ಬಂದಿದೆ. ಮೊದಲ ದಿನ 700 ಜನ ಭೇಟಿ ನೀಡಿದ್ದು, ಇದರಲ್ಲಿ ಹಲವರು ಸ್ಥಳದಲ್ಲೇ ಜಾಬ್ ಆಫರ್ ಲೆಟರ್ ಪಡೆದುಕೊಂಡಿದ್ದಾರೆ. ಈ ಮೆಗಾ ಶೈಕ್ಷಣಿಕ ಮೇಳದಲ್ಲಿ 40ಕ್ಕೂ ಹೆಚ್ಚು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಹಾಗೂ 20ಕ್ಕೂ ಹೆಚ್ಚು ಕಂಪನಿಗಳು ಭಾಗಿಯಾಗಿವೆ. ಸ್ನಾತಕೋತ್ತರ ಕೋರ್ಸ್ ಗಳ ಬಗ್ಗೆ ಸಂಪೂರ್ಣ ಮಾಹಿತಿ ಹಾಗೂ ಉದ್ಯೋಗವಕಾಶಗಳ ಬಗ್ಗೆ ವಿದ್ಯಾರ್ಥಿಗಳು ಮಾಹಿತಿ ಪಡೆದುಕೊಂಡಿದ್ದಾರೆ. ಕಾರ್ಯಕ್ರಮವನ್ನ ಜ್ಯೋತಿ ಬೆಳಗಿಸುವ ಮೂಲಕ ಗಣ್ಯರು ಚಾಲನೆ ನೀಡಿದ್ರು. ಅದಕ್ಕೂ ಮುನ್ನ ಸ್ಟಾಲ್ ಗಳಿಗೆ ಭೇಟಿ ನೀಡಿ, ಶೈಕ್ಷಣಿಕ ಸಂಸ್ಥೆಗಳ ಬಗ್ಗೆ ಮಾಹಿತಿ ಪಡೆದರು. ರೆವಾ ವಿಶ್ವವಿದ್ಯಾಲಯ ಕುಲಪತಿ ಡಾ.ಪಿ ಶ್ಯಾಮರಾಜು, ಕೇಂಬ್ರಿಡ್ಜ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ಚೇರ್ಮನ್ ಡಿ.ಕೆ ಮೋಹನ್, ನಟಿ ಪ್ರಿಯಾಂಕ ಉಪೇಂದ್ರ, ಹಾಗೂ ʻಪಬ್ಲಿಕ್ ಟಿವಿʼಯ ಮುಖ್ಯಸ್ಥರು ಹೆಚ್.ಆರ್ ರಂಗನಾಥ್ ಪಿಜಿ ಕೋರ್ಸ್ ಗಳು ಯಾಕೆ ಮಹತ್ವ ಪಡೆದುಕೊಳ್ಳುತ್ತೆ? ಸ್ನಾತಕೋತ್ತರ ಪದವಿ ಬದುಕು ಕಟ್ಟಿಕೊಳ್ಳಲು ಹೇಗೆ ಸಹಾಯ ಆಗುತ್ತವೆ? ಅನ್ನೋದ್ರ ಬಗ್ಗೆ ತಿಳಿಸಿಕೊಟ್ಟರು. ಇನ್ನೂ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಹೆಚ್.ಆರ್ ರಂಗನಾಥ್, ಕೌಶಲಗಳನ್ನ ಪರಿಪೂರ್ಣವಾಗಿ ತಯಾರಿ ಮಾಡೋದು ಸ್ನಾತಕೋತ್ತರ ಪದವಿ. ಜೀವನ ಕಟ್ಟಿಕೊಳ್ಳಲು ಉನ್ನತ ಶಿಕ್ಷಣ ಅವಶ್ಯಕ. ಎಐ ಉದ್ಯೋಗಗಳನ್ನ ಕೊಡಬಹುದು.. ಕಿತ್ತುಕೊಳ್ಳಲೂಬಹುದು. ಬಹಳ ಉದ್ಯೋಗಳು ಲಭ್ಯವಿದ್ರೂ ಜನ ಇಲ್ಲ. ಕೆಲಸಕ್ಕೆ ಬಂದ್ರೂ ಕೆಲವರಿಗೆ ಆಸಕ್ತಿ ಇಲ್ಲ ಎಂದು ಹೇಳಿದರು. ಇನ್ನೂ ಈ ಮೇಳಕ್ಕೆ ಬಂದ ಉದ್ಯೋಗಕಾಂಕ್ಷಿಗಳಿಗೆ ಅಕನಾಲೇಜರ್ ಫಸ್ಟ್ ಹಾಗೂ ಅನಮೇಟಾ ಐಓಟಿ ಕಂಪನಿ ಐವರಿಗೆ ಉದ್ಯೋಗ ಅವಕಾಶ ಕಲ್ಪಿಸಿತು. ಇನ್ನೂ ಲಕ್ಕಿ ಡಿಪ್ ಮೂಲಕ ಆರತಿ ಲ್ಯಾಪ್ಟಾಪ್ ಗೆದ್ರೆ, ಕೆಲವ್ರು ಬೈಸಿಕಲ್ ವಿಜೇತರಾದ್ರು. ಭಾನುವಾರ (ಆ.9) ಬೆಳಗ್ಗೆ 9 ರಿಂದ ಸಂಜೆ 6 ಘಂಟೆಯ ತನಕ ಈ ಮೇಳ ನಡೆಯಲಿದ್ದು, ನೀವು ಕೂಡ ತಪ್ಪದೇ ಬನ್ನಿ. ಕನಸಿನ ಕೋರ್ಸ್ ಆಯ್ಕೆ ಮಾಡಿಕೊಳ್ಳೋದರ ಜೊತೆಗೆ ಉಜ್ವಲ ಭವಿಷ್ಯವನ್ನ ರೂಪಿಸಿಕೊಳ್ಳಿ.